ನಗರದ ಶಾಂತಿನಿಕೇತನ ವಿಜ್ಞಾನ ಮತ್ತು ವಾಣ ಜ್ಯ ಪದವಿ ಪೂರ್ವ ಕಾಲೇಜಿನಲ್ಲಿ 2018-19ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಯಿತು.
ನಮಗೆ ನಮ್ಮ ಹಿರಿಯರು ಒಳ್ಳೆಯ ಪರಿಸರವನ್ನು ಬಿಟ್ಟು ಹೋಗಿದ್ದಾರೆ ನಾವು ಅದನ್ನು ಹಾಳು ಮಾಡದೆ ಇನ್ನು ಉತ್ತಮ ರೀತಿಯಲ್ಲಿ ಅದನ್ನು ಮುಂದಿನ ಪೀಳಿಗೆಗೆ ಹಿಂದುರಗಿಸಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು ಅದಕ್ಕಾಗಿ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಒಂದೊಂದು ಸಸಿ ಕೊಡುವುದರ ಮೂಲಕ ಅವರನ್ನು ಬರ ಮಾಡಿಕೊಂಡರು.
ಈ ಸಮಾರಂಭಕ್ಕೆ ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ಶೀಲಾ ಎಸ್.ಬಿರಾದಾರ ಅವರು ಮಾತನಾಡಿ ಇಂದಿನ ಎಲ್ಲಾ ರಂಗದಲ್ಲಿ ನಾವು ಸ್ಪರ್ಧೆಯನ್ನು ಕಾಣುತ್ತೇವೆ. ಅದಕ್ಕಾಗಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆ ದಿಸೆಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ಕೊಡುತ್ತಿದ್ದು ಅದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಯಶಸ್ಸನ್ನು ಪಡೆಯಬೇಕೆಂದು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಯಾವುದೇ ಗುರುವಿಲ್ಲದೆ ಯೋಗಾಭ್ಯಾಸವನ್ನು ಮಾಡಿದ ರಾಜು ಮಾನೆ ಎಂಬ ಹಿರಿಯ ವಿದ್ಯಾರ್ಥಿಯು ಯೋಗಾಸನದ ಕೆಲವು ಪಟ್ಟುಗಳನ್ನು ಹಾಕಿ ತೋರಿಸಿದರು. ಅದಕ್ಕಾಗಿ ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ಶೀಲಾ ಎಸ್.ಬಿರಾದಾರವರು ಆ ವಿದ್ಯಾರ್ಥಿಯನ್ನು ಪ್ರಶಂಸಿ ಬಹುಮಾನವನ್ನು ನೀಡಿ ಗೌರವಿಸಿದರು.
ಪ್ರಾಚಾರ್ಯರಾದ ಚಂದನಗೌಡ ಮಾಲಿಪಾಟೀಲಯವರು ಮಾತನಾಡುತ್ತ ವಿದ್ಯಾರ್ಥಿಗಳು ಕೇವಲ ವಿಷಯ ಜ್ಞಾನ ಸಂಪಾದನೆ ಮಾಡಿದರೆ ಸಾಲದು ಬದಲಾಗಿ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಉಪನ್ಯಾಸಕರಾದ ರಾಮನಗೌಡ ನಾದ, ಪ್ರಶಾಂತ ಪಾಟೀಲ, ಪ್ರವೀಣ ಗೆಣ್ಣೂರ, ವಿವೇಕ ಕುಲಕಣ ್, ಬಿ.ಎಸ್.ಹಿರೇಮಠ, ವ್ಹಿ.ಎಸ್.ಜೋಶಿ, ಸಿದ್ದಣ ಸರವಿ, ಆನಂದ ಎ, ಶೃತಿ ರಜಪೂತ, ಸಹನಾ ಕುಲಕಣ ್, ಶಂಕರ ಕುಂಬಾರ, ಬಿ.ಬಿ.ಹಿರೇಮಠ, ಮತ್ತು ಆರ್ ಪಿ ಜಾಧವ ಮುಂತಾದವರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಾದ ಕುಮಾರಿ ರಾಧಾ.ಡಿ, ಸಾಕ್ಷಿ ಗಲಗಲಿ, ಅನಮೋಲ ಕತ್ರಿ, ಶಾಂಭವಿ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಯಿಸುಮಂತ ಹೂಗಾರ ಸ್ವಾಗತಿಸಿದರು. ದಿವ್ಯಾ ಪವಾರ ವಂದನಾರ್ಪಣೆ ಮಾಡಿದರು.