ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ 70ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೀಲಾ ಬಿರಾದಾರ ಮುಖ್ಯ ಅತಿಥಿಯಾಗಿ ಮಾತನಾಡುತ್ತ ನಮ್ಮ ಸಂವಿಧಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಓದಿ ಅದನ್ನು ಅರ್ಥೈಸಿಕೊಂಡು ಅದನ್ನು ಸರಿಯಾಗಿ ಪಾಲಿಸಬೇಕು ನಮ್ಮ ಸಂವಿಧಾನವು ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ನೀಡಿದೆ. ಆ ಅವಕಾಶಗಳ ಪ್ರಯೋಜನವನ್ನು ಪಡೆದು ಇಂದು ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬಹುದು ಎಂದು ನುಡಿದರು.
ಇದೆ ಸಂದರ್ಭದಲ್ಲಿ ಸಂಸ್ಥೆಯ ಚೇರಮನ್ರಾದ ಹಾಗೂ ಜಿಲ್ಲಾ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾದ ಡಾ: ಸುರೇಶ ಬಿರಾದಾರರವರು ಎಲ್ಲ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.
ಪ್ರಾಚಾರ್ಯರಾದ ಶ್ರೀ ಚಂದನಗೌಡ ಮಾಲಿಪಾಟೀಲ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು.
ಈ ಸಂದರ್ಭದಲ್ಲಿ ಮಕ್ಕಳು ಭಾಷಣವನ್ನು ಮಾಡಿದರು. ಕನ್ನಡ ಪ್ರಾಧ್ಯಾಪಕ ಶ್ರೀ ಸಿದ್ದಣ್ಣ ಸರವಿ ದೇಶಭಕ್ತಿ ಗೀತೆಗಳನ್ನು ಹಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎಸ್.ಎ. ಹುಗ್ಗಿ, ಎ.ಎಚ್ ಸಗರ, ವಿವೇಕ ವೈಶಂಪಾಯನ, ಸೀಮಾ ಸದಲಗಾ, ಸರೋಜಾ, ಗಿರಿಜಾ ಕರಡಿ, ಭಾರತಿ ಪಾಟೀಲ, ಶ್ರೀದೇವಿ ಜೋಳದ, ದೀಪಾ ತಿಳಗುಳ, ಸುರೇಖಾ ಪಾಟೀ,ಮಿನಾಕ್ಷಿ, ಹಫೀಜ, ತಬಸ್ಸುಮ, ಅಶ್ವಿನ, ಅನಿಲ ಬಾಗೇವಾಡಿ, ಸಮಿನಾ, ಮಧುಮತಿ, ಅನಿತಾ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿ ಶೋಭಾ ಕೂಡಗಿ ನಿರೂಪಿಸಿದರು, ಶಿಕ್ಷಕ ಎಸ್. ಆರ್. ಕಟ್ಟಿಮನಿ ವಂದಿಸಿದರು.