World Environment Day -2018

Date

ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ
“ವಿಶ್ವ ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ”

ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಚಂದನಗೌಡ ಮಾಲಿಪಾಟೀಲರವರು ಸಸಿ ನೆಟ್ಟು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ವಿಶ್ವ ಪರಿಸರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸಿಮಿತವಾಗಿರದೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ದಿನ ನಿತ್ಯ ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ನುಡಿದರು. ಸಂಸ್ಥೆಯ ಚೇರಮನ್ ಡಾ.ಸುರೇಶ ಬಿರಾದಾರವರು “ನಮ್ಮ ದಿನನಿತ್ಯ ಜೀವನದಲ್ಲಿ ಪರಿಸರಕ್ಕೆ ದಕ್ಕೆ ಉಂಟಾಗದ ಹಾಗೇ ನೋಡಿಕೊಂಡು ಹೋಗುವುದರ ಜೊತೆಗೆ ಅದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು” ಎಂದು ನುಡಿದರು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶೀಲಾ ಬಿರಾದಾರವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪರಿಸರ ಮತ್ತು ಜಲ ಸಂರಕ್ಷಣೆಯ ಬಗ್ಗೆ ಶ್ರೀಮತಿ ದೀಪಾ ತಿಳಗೋಳ ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಕಿರು ನಾಟಕವನ್ನು ಮಾಡಿ ಅರಣ್ಯ ಸಂರಕ್ಷಣೆ, ಜಲಮಾಲಿನ್ಯ, ವಾಯುಮಾಲಿನ್ಯ, ಅತೀ ಉಷ್ಣಾಂಶ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿದರು. ಶ್ರೀಮತಿ ಮೋಶಿನಾ ಪರಿಸರ ದಿನಾಚರಣೆಯನ್ನು ನಿರೂಪಿಸಿದರು. ಶ್ರೀ ಹಫೀಜ್ ಹುಬ್ಬಳಿ ವಂದಿಸಿದರು.
ಶ್ರೀಮತಿ ಭಾರತಿ ಪಾಟೀಲ, ಶ್ರೀ ಎ.ಎಚ್.ಸಗರ, ಶ್ರೀ ಪ್ರವೀಣ ಗೆಣ್ಣೂರ, ಶ್ರೀ ಇಲಿಯಾಸ್, ಶ್ರೀಮತಿ ಮಧುಮತಿ, ಶ್ರೀ ಯುನುಸ್, ಶ್ರೀ ಎಸ್.ಆರ್.ಕಟ್ಟಿಮನಿ, ಶ್ರೀಮತಿ ಶ್ರೀದೇವಿ, ಇತರರು ಉಪಸ್ಥಿತರಿದ್ದರು.

More
articles

I'm searching for...