Yoga Day-2018

Date

ಶಾಂತಿನಿಕೇತನ ಶಾಲೆಯಲ್ಲಿ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ವಿಜಯಪುರದ ಆದರ್ಶನಗರದಲ್ಲಿರುವ ಶಾಂತಿನಿಕೇತನ ಶಾಲೆಯಲ್ಲಿ ಹಮ್ಮಿಕೊಳ್ಳಲಾದ 4ನೇ ಅಂತರಾಷ್ಟ್ರೀಯ ಯೋಗದಿನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಅಂತರಾಷ್ಟ್ರೀಯ ಯೋಗಪಟು ಶ್ರೀಮತಿ ಲಕ್ಷ್ಮೀ ತೊದಲಬಾಗಿ ಅವರು ಯೋಗಾಸನದ ವಿವಿಧ ಪ್ರಕಾರಗಳಾದ ತಾಡಾಸನ, ವೃಕ್ಷಾಸನ, ಏಕಪಾದಾಸನ ಮತ್ತು ಪ್ರಾಣಾಯಾಮಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಮಾಡಿಸಿದರು. ನಂತರ ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ಮನುಷ್ಯನಿಗೆ ಹಲವಾರು ಸಮಸ್ಯೆಗಳು ಇರುತ್ತವೆ. ಈ ಸಮಸ್ಯೆಗಳಿಗೆಲ್ಲ ಯೋಗಾಸನ ಒಂದೇ ಪರಿಹಾರ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಯೋಗಾಸನವನ್ನು ಹಾಕುವುದನ್ನು ಕಲಿಯಬೇಕು ಅಂದಾಗ ಮಾತ್ರ ಅವರ ಸರ್ವತೋಮುಖ ಬೆಳವಣ ಗೆ ಸಾಧ್ಯ ಎಂದು ನುಡಿದರು.
ವಿದ್ಯಾರ್ಥಿನಿಯಾದ ಕುಮಾರಿ ಪವಿತ್ರಾ ಬಾಗೇವಾಡಿ ಯೋಗಾಸನಗಳಿಂದ ಹಲವಾರು ಪ್ರಯೋಜನಗಳಿವೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಾಸನಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿದೆ ಎಂದು ಮಾತನಾಡಿದಳು. ಇನ್ನೂರ್ವ ವಿದ್ಯಾರ್ಥಿಯಾದ ಕುಮಾರಿ ವೈಷ್ಣವಿ ಮಠಪತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಾಸನವು ಜನಪ್ರೀಯಗೊಳ್ಳಲು ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿಜಿಯವರ ಪಾತ್ರವು ಅಪಾರವಾಗಿದೆ ಎಂದು ನುಡಿದಳು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆಯರಾದ ಶ್ರೀಮತಿ ಶೀಲಾ ಬಿರಾದಾರ, ಚೇರಮನರಾದ ಡಾ.ಸುರೇಶ. ಬಿರಾದಾರ, ಸಂಸ್ಥೆಯ ನಿರ್ದೇಶಕರಾದ ಶರತ್ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು. ವಿಧ್ಯಾರ್ಥಿಗಳು ಹಾಗೂ ಶಾಲೆಯ ಭೋಧಕ ಭೊಧಕೇತರ ಸಿಬ್ಭಂದಿ ಯೋಗಾಸನದಲ್ಲಿ ಪಾಲ್ಗೊಂಡಿದ್ದರು. ಪ್ರಾಚಾರ್ಯ ಚಂದನಗೌಡ ಎಸ್ ಮಾಲಿಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹಸಿನಾ ಇನಾಮದಾರ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಎ.ಎಚ್.ಸಗರ ವಂದಿಸಿದರು.

More
articles

I'm searching for...