ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಇಂದು ವಿದ್ಯಾರ್ಥಿಗಳಿಗೆ ಉಚಿತ ಯೋಗ ತರಬೇತಿಯನ್ನು ಪತಂಜಲಿ ಯೋಗ ಸಮಿತಿಯ ಕರ್ನಾಟಕದ ರಾಜ್ಯ ಪ್ರಭಾರಿಯಾದ ಶ್ರೀಮತಿ ಆರತಿ ಕಾನಗೊ’ಅವರು ನಡೆಸಿಕೊಟ್ಟರು. ಅವರು ವಿದ್ಯಾರ್ಥಿಗಳಿಗೆ ನಮನಾಸನ, ತಟಾಸನ, ಪರ್ವತಾಸನಾ, ಕುಕ್ಕುಟಾಸನಾ ಮುಂತಾದ ಆಸನಗಳನ್ನು ಮಾಡಿಸಿದರು. ನಂತರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಯೋಗಾಸನ ಮಾಡುವುದರಿಂದ ನಾವು ನಮ್ಮ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಧೂಮಪಾನ, ಮಧ್ಯಪಾನ ಮುಂತಾದ ವ್ಯಸನಗಳಿಂದ ಮುಕ್ತಿಯನ್ನು ಹೊಂದಬಹುದು ಎಂದರು. ಭಾರತ ದೇಶಕ್ಕೆ ಪ್ರತಿ ವರ್ಷ ವಿದೇಶಿ ಕಂಪನಿಗಳಿಂದ ಸುಮಾರು 10 ಲಕ್ಷ ಕೋಟಿ ಔಷಧಿಗಳು ಆಮದು ಆಗುತ್ತವೆ. ಇಷ್ಟೊಂದು ಹಣ ವಿದೇಶಿ ಕಂಪನಿಗಳ ಪಾಲಾಗುತ್ತಿದೆ. ಇದರಿಂದ ಭಾರತದ ಏಳಿಗೆ ಕುಂಟಿತವಾಗುತ್ತಿದೆ. ಆ ಎಲ್ಲ ಹಣ ಭಾರತದಲ್ಲಿಯೇ ಇರಬೇಕೆಂದರೆ, ನಮ್ಮ ದೇಶ ಏಳಿಗೆಯನ್ನು ಹೊಂದಬೇಕೆಂದರೆ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ನಾವು ಪ್ರತಿ ನಿತ್ಯ ಬೆಳಿಗ್ಗೆ ಯೋಗಾಸನವನ್ನು ಮಾಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಶ್ರೀ ಚಂದನಗೌಡ ಮಾಲಿಪಾಟೀಲರವರು ಸ್ವಾಗತಿಸಿ ಮಾತನಾಡುತ್ತ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಒಂದೇ ಒಂದು ಮಾರ್ಗವೆಂದರೆ ಅದು ಯೋಗ ಎಂದು ನುಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ವಿವೇಕ ವೈಶಂಪಾಯನ. ಮೊಹ್ಮದ ಅಲಿ, ಎಸ್.ಆರ್.ಕಟ್ಟಿಮನಿ, ಅಶ್ವೀನ ಶ್ರೀದೇವಿ ಜೋಳದ, ಸೀಮಾ ಸದಲಗಾ, ಗಿರಿಜಾ ಕರಡಿ, ಸಮೀನಾ ತೊರವಿ, ಸರೋಜಾ ಕರ್ಕಳಿ, ಭಾರತಿ ಪಾಟೀಲ, ಎಸ್.ಎ.ಹುಗ್ಗಿ, ರೇಣುಕಾ ಕಡೇಮನಿ, ಕಾಶೀನಾಥ ಅವಟಿ, ರಾಜೇಶ್ವರಿ ಪಿ. ಮಮತಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.